Home> Crime
Advertisement

ವಟ ಪೂರ್ಣಿಮೆಯಂದೇ ಕೊಡಲಿಯಿಂದ ಕೊಚ್ಚಿ ಗಂಡನ ಕೊಲೆ; ಮದುವೆಯಾದ 20ನೇ ದಿನಕ್ಕೆ ಪತ್ನಿಯೂ ಆತ್ಮಹತ್ಯೆ!!

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಟ ಪೂರ್ಣಿಮೆಯ ದಿನದಂದೇ ಮಹಿಳೆಯೊಬ್ಬಳು ಕೊಡಲಿಯಿಂದ ಕೊಚ್ಚಿ ಪತಿಯನ್ನ ಭೀಕರವಾಗಿ ಕೊಂದಿದ್ದಾಳೆ. ಇವರಿಬ್ಬರು ಕೇವಲ 20 ದಿನಗಳ ಹಿಂದಷ್ಟೇ ಮದುವೆಯಾಗಿದ್ದರೆಂದು ತಿಳಿದುಬಂದಿದೆ.  

ವಟ ಪೂರ್ಣಿಮೆಯಂದೇ ಕೊಡಲಿಯಿಂದ ಕೊಚ್ಚಿ ಗಂಡನ ಕೊಲೆ; ಮದುವೆಯಾದ 20ನೇ ದಿನಕ್ಕೆ ಪತ್ನಿಯೂ ಆತ್ಮಹತ್ಯೆ!!

ವಟ ಪೂರ್ಣಿಮೆಯಂದೇ ಪತ್ನಿಯೊಬ್ಬಳು ಕೊಡಲಿಯಿಂದ ಕೊಚ್ಚಿ ಗಂಡನ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕುಪ್ವಾಡ್ ಪಟ್ಟಣದಲ್ಲಿ ನಡೆದಿದೆ. ಪತಿಯನ್ನ ಭೀಕರವಾಗಿ ಹತ್ಯೆ ಮಾಡಿದ ಬಳಿಕ ಪತ್ನಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇವರಿಬ್ಬರೂ 20 ದಿನಗಳ ಹಿಂದಷ್ಟೇ  ಮದುವೆಯಾಗಿದ್ದರೆಂದು ತಿಳಿದುಬಂದಿದೆ. 

50 ವರ್ಷದ ಪತಿ ಅನಿಲ್ ಲೋಖಂಡೆಯನ್ನು  ಕೊಲೆ ಮಾಡಿದ ಆರೋಪದ ಮೇರೆಗೆ ಆತನ ಪತ್ನಿ ರಾಧಿಕಾ ಲೋಖಂಡೆಯನ್ನು ಪೊಲೀಸರು ಬಂಧಿಸಿದ್ದಾರೆ. ಕೇವಲ ಮೂರು ವಾರಗಳ ಹಿಂದೆ ಅಂದರೆ ಮೇ 23ರಂದು ಅನಿಲ್‌ ಅವರು ಸತಾರಾದ ರಾಧಿಕಾಳನ್ನು ಮದುವೆಯಾಗಿದ್ದ.

ಇದನ್ನೂ ಓದಿ: ಸಕ್ಕರೆ ನಾಡು ಮಂಡ್ಯದಲ್ಲಿ ಗಾಂಜಾ ಘಮಲು

ಮಂಗಳವಾರ ರಾತ್ರಿ ಯಾವುದೋ ಕಾರಣಕ್ಕೆ ದಂಪತಿ ನಡುವೆ ಜಗಳವಾಗಿದೆ. ಮಧ್ಯರಾತ್ರಿ 12.30ರ ಸುಮಾರಿಗೆ ಅನಿಲ್ ನಿದ್ರೆ ಮಾಡುತ್ತದ್ದಾಗ ರಾಧಿಕಾ ಕೊಡಲಿಯಿಂದ ಆತನ ತಲೆಗೆ ಹೊಡೆದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಂತರ ಆಕೆ ತನ್ನ ಸೋದರಸಂಬಂಧಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ. ಈ ಬಗ್ಗೆ ಸಾಂಗ್ಲಿಯ ಎಂಐಡಿಸಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ದೀಪಕ್ ಭಂಡವಾಲ್ಕರ್ ಮಾಹಿತಿ ನೀಡಿದ್ದಾರೆ. 

ಅನಿಲ್ ಲೋಖಂಡೆಗೆ 2ನೇ ಮದುವೆ!

ಬುಧವಾರ ರಾಧಿಕಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪೊಲೀಸರ ಪ್ರಕಾರ, ಕೊಲೆಗೆ ಪ್ರಮುಖ ಕಾರಣ ಕೌಟುಂಬಿಕ ಕಲಹ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ:  ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳ ಮೇಲೆ ಇಡಿ ದಾಳಿ

ಬುಧವಾರ ಮಧ್ಯರಾತ್ರಿ 12:30ರ ಸುಮಾರಿಗೆ 27 ವರ್ಷದ ಮಹಿಳೆ ತನ್ನ ಪತಿ ಅನಿಲ್ ಲೋಖಂಡೆ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಈ ದಂಪತಿ ಸಾಂಗ್ಲಿ ಜಿಲ್ಲೆಯ ಕುಪ್ವಾಡ್ ತಹಸಿಲ್ ನಿವಾಸಿಗಳಾಗಿದ್ದಾರೆ. ಲೋಖಂಡೆ ಅವರ ಮೊದಲ ಪತ್ನಿ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರು. ಹೀಗಾಗಿ ಆತ ರಾಧಿಕಾಳ ಜೊತೆಗೆ ಎರಡನೇ ವಿವಾಹವಾಗಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಪತಿಯ ಕೊಲೆ: ಪತ್ನಿ ಬಂಧನ

ಇದಕ್ಕೂ ಮೊದಲು ಇಂದೋರ್ ಸಾರಿಗೆ ಉದ್ಯಮಿ ರಾಜಾ ರಘುವಂಶಿಯನ್ನು ಪತ್ನಿ ಸೋನಮ್ ಹನಿಮೂನ್ ಪ್ರವಾಸಕ್ಕೆಂದು ಮೇಘಾಲಯಕ್ಕೆ ಕರೆದುಕೊಂಡು ಹೋಗಿ ಬಾಡಿಗೆ ಹಂತಕರಿಂದ ಕೊಲೆ ಮಾಡಿಸಿದ್ದಳು. ಸೋನಮ್ ತನ್ನ ಪ್ರೇಮಿಯೊಂದಿಗೆ ರಾಜಾರನ್ನು ಕೊಲ್ಲಲು ಸಂಚು ರೂಪಿಸಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಇಲ್ಲಿಯವರೆಗೆ ಸೋನಮ್ ಮತ್ತು ಇತರ ನಾಲ್ವರನ್ನು ಬಂಧಿಸಿದ್ದಾರೆ. ಮೇ 11ರಂದು ಇಂದೋರ್‌ನಲ್ಲಿ ವಿವಾಹದ ಬಳಿಕ ರಾಜಾ ಮತ್ತು ಸೋನಮ್ ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದ್ದರು. ಜೂನ್ 2ರಂದು ರಾಜಾ ಅವರ ಶವ ಪತ್ತೆಯಾತ್ತು. ಮೇ 23ರಂದು  ಅವರು ನೊಂಗ್ರಿಯಾಟ್ ಗ್ರಾಮದ ಹೋಂಸ್ಟೇಯಿಂದ ಚೆಕ್ ಔಟ್ ಮಾಡಿದ ಕೆಲವೇ ಗಂಟೆಗಳ ನಂತರ ನಾಪತ್ತೆಯಾಗಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Read More