Home> Entertainment
Advertisement

ಮತ್ತೆ ಕಿಚ್ಚ ಸುದೀಪ್‌ ಹೆಗಲಿಗೆ ಬಿಗ್‌ ಬಾಸ್‌... ಸುದ್ದಿಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ ತಂಡ:. ಈ ದಿನದಿಂದ ಶುರುವಾಗಲಿದೆ ಸೀಸನ್‌ 12ರ ಆಟ!

Bigg Boss Kannada Season 12 Host: ಬಿಗ್‌ ಬಾಸ್‌ ಸೀಸನ್‌ ೧೨ರ ನಿರೂಪಕನಾಗಿ ಕಿಚ್ಚ ಸುದೀಪ್‌ ಅವರೇ ಇರಲಿದ್ದಾರೆ. ಈ ಬಗ್ಗೆ ಇಂದು ಬಿಗ್‌ ಬಾಸ್‌ ಟೀಂ ನಡೆಸಿದ್ದ ಪ್ರೆಸ್‌ಮೀಟ್‌ನಲ್ಲಿ ಸ್ಪಷ್ಟನೆ ನೀಡಲಾಗಿದೆ. 

ಮತ್ತೆ ಕಿಚ್ಚ ಸುದೀಪ್‌ ಹೆಗಲಿಗೆ ಬಿಗ್‌ ಬಾಸ್‌... ಸುದ್ದಿಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ ತಂಡ:. ಈ ದಿನದಿಂದ ಶುರುವಾಗಲಿದೆ ಸೀಸನ್‌ 12ರ ಆಟ!

Bigg Boss Kannada Season 12 Kiccha Sudeep: ಬಹುದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಾಯ್ತು. ಬಿಗ್‌ ಬಾಸ್‌ ಸೀಸನ್‌ ೧೨ರ ನಿರೂಪಕನಾಗಿ ಕಿಚ್ಚ ಸುದೀಪ್‌ ಅವರೇ ಇರಲಿದ್ದಾರೆ. ಈ ಬಗ್ಗೆ ಇಂದು ಬಿಗ್‌ ಬಾಸ್‌ ಟೀಂ ನಡೆಸಿದ್ದ ಪ್ರೆಸ್‌ಮೀಟ್‌ನಲ್ಲಿ ಸ್ಪಷ್ಟನೆ ನೀಡಲಾಗಿದೆ. 

ಕಿಚ್ಚ ಸುದೀಪ್‌ ಅವರೇ ಈ ಸಂದರ್ಭದಲ್ಲಿ ಮಾತನಾಡಿ, ಮತ್ತೆ ಈ ಪ್ರಾಜೆಕ್ಟ್‌ ಒಪ್ಪಿಕೊಳ್ಳಲು ಕಾರಣವೇನು? ಅಂದು ಟ್ವೀಟ್‌ ಮಾಡಿದ್ದಕ್ಕೆ ಕಾರಣವೇನು? ಎಂಬೆಲ್ಲಾ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 

ಇದನ್ನೂ ಓದಿ: "ಮದುವೆಗೆ ಮೊದಲೇ ನಾನು ತಾಯ್ತನ ಅನುಭವಿಸಿದ್ದೆ; ಅದಕ್ಕೆ ಕಾರಣವಾಗಿದ್ದು ಆ ನಟನ ಒಡನಾಟ"- ನಟಿ ಅನುಷ್ಕಾ ಶರ್ಮಾ ಸೆನ್ಸೇಷನಲ್‌ ಹೇಳಿಕೆ ವೈರಲ್‌

"ಪ್ರೇಕ್ಷಕರಿಗೆ ಖುಷಿ ಅಂತ ಕಲರ್ಸ್ ಜೊತೆ ಕೊಲಾಬ್ ಮಾಡಿದ್ದು, ನಮಗಾಗಿ ಅಲ್ಲಾ. ವೀಕ್ಷಕರಂತೂ ಬಿಗ್‌ ಬಾಸ್‌ನ್ನು ಐಪಿಎಲ್‌ ರೇಂಜ್‌ಗೆ ನೋಡುತ್ತಾರೆ. ನನ್ನ ಚೈತನ್ಯ ಯಾವತ್ತೂ ಕಡಿಮೆ ಆಗಿಲ್ಲ. ನಾನು ಪ್ರತೀ ಕೆಲಸವನ್ನು ಹುಮ್ಮಸ್ಸಲ್ಲೇ ಮಾಡುತ್ತೇನೆ

ಅಂದು ನಾನು ಮಾಡಿದ್ದ ಟ್ವೀಟ್‌ ಕೇವಲ ನನ್ನ ಅಭಿಪ್ರಾಯವಷ್ಟೇ, ಹೊರತಾಗಿ ಬೆದರಿಕೆಯಲ್ಲ, ಎಚ್ಚರಿಕೆಯಲ್ಲ. ಬೇರೊಬ್ಬರು ಬಂದು ಬಿಗ್‌ ಬಾಸ್‌ ನಡೆಸಿಕೊಟ್ಟರೆ ಖುಷಿಯಿಂದ ನಮ್ಮವರೇ ನಡೆಸಿಕೊಡುತ್ತಾರೆ ಅಂತ ನೋಡುತ್ತಿದ್ದೆ. ನಾನು ಬಿಗ್ ಬಾಸ್‌ನ ಮಿಸ್ ಮಾಡ್ಕೋತಿರ್ಲಿಲ್ಲ. 
ಇನ್‌ಸೆಕ್ಯೂರಿಟಿ ಅಲ್ಲಿ ಜೀವನ ನಡೆಸಿಲ್ಲ ನಾನು. ನನ್ನ ಜಾಗಕ್ಕೆ ಯಾರೇ ಬಂದ್ರು ಖುಷಿ ಇದೆ" ಎಂದಿದ್ದಾರೆ.

ಎಲ್ಲರೂ ಒಂದೇ ಥರ ಆಲೋಚಿಸುವವರನ್ನು ಹಾಕಿಕೊಂಡು ಬಿಗ್‌ ಬಾಸ್‌ ನಡೆಸುವುದಕ್ಕೆ ಆಗುತ್ತಾ? ಬಿಗ್‌ ಬಾಸ್‌ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವಾಗ ಎಂಥವರನ್ನು ಒಳಗೆ ಕಳುಹಿಸುತ್ತೇವೆ ಎಂಬ ಕ್ಲಾರಿಟಿ ಇರಬೇಕು. ಜೊತೆಗೆ ಸಿಬ್ಬಂದಿಗಳಿಗೆ ಅಂತಹವರನ್ನು ಬಿಗ್‌ಬಾಸ್‌ಗೆ ಯಾಕೆ ಕಳುಹಿಸುತ್ತೇವೆ ಎಂಬುದು ಗೊತ್ತಿದೆ. ನನಗೆ ಅದರ ಬಗ್ಗೆ ಯಾವುದೇ ಸಮಸ್ಯೆಯಿಲ್ಲ. ಜೊತೆಗೆ ನಾನು ಯಾವುದೇ ಕಂಡೀಶನ್‌ನ್ನು ಹಾಕಿಲ್ಲ" ಎಂದಿದ್ದಾರೆ.

"ಬರಿ ಕಂಟ್ರೋಲ್ ಮಾಡೋದೇ ನನ್ನ ಕೆಲಸ ಆಗ್ಬಾರ್ದು. ಬಿಗ್ ಬಾಸ್ ಒಳಗೆ ಬರೋದೇ ಬುದ್ದಿವಂತರು ಹಾಗು ಅತೀ ಬುದ್ದಿವಂತರು. ವಿವಾದಿತ ಸ್ಪರ್ಧಿಗಳು ಬಂದರೂ ನಾನು ಹ್ಯಾಂಡಲ್ ಮಾಡ್ತೀನಿ. ಅಂದಹಾಗೆ ನಾನು ಮತ್ತೆ ಬಂದಿದ್ದು ಸುಷ್ಮಾ ಅವರಿಗೋಸ್ಕರ" ಎಂದು ಸ್ಪಷ್ಟವಾಗಿ ಕಿಚ್ಚ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ವಾರದ ಆರಂಭದಲ್ಲೇ ಚಿನ್ನದ ಬೆಲೆ 6000 ರೂ. ಭರ್ಜರಿ ಇಳಿಕೆ! RBIನ ಈ ನಿರ್ಧಾರವೇ ಬಂಗಾರದ ದರ ಪಾತಾಳಕ್ಕಿಳಿಯಲು ಕಾರಣ.. 10 ಗ್ರಾಂಗೆ ಇಂದು ಇಷ್ಟಾಗಿದೆ ಬೆಲೆ

ಇನ್ನು ಈ ಬಗ್ಗೆ ಮಾತನಾಡಿದ ಸುಷ್ಮಾ, "ಸುದೀಪ್ ನಮ್ಮತ್ರ ಮಾತಾಡಿ ಟ್ವೀಟ್ ಮಾಡಿದ್ರು. ಬ್ರೇಕ್ ಬೇಕು ಅಂತ ಹೇಳಿದ್ರು. ಆದ್ರೂ ಅವರಿಲ್ಲದೆ ಶೋ ನಡೆಯೋದಿಲ್ಲ ಅಂತಾ ಗೊತ್ತಿತ್ತು ನಮಗೆ. ಇಲ್ಲಿ ಕಂಡೀಷನ್ಸ್ ಇರ್ಲಿಲ್ಲ, ಬದಲಾಗಿ ಸಜೆಶನ್‌ ಇತ್ತು" ಎಂದು ಹೇಳಿದರು.

ಬಿಗ್‌ ಬಾಸ್‌ ಯಾವಾಗ ಶುರುವಾಗುತ್ತೆ ಎಂಬುದರ ಬಗ್ಗೆಯೂ ಸ್ಪಷ್ಟನೆ ಕೊಟ್ಟ ತಂಡ, "ಡೇಟ್ ಯಾವಾಗ ಎಂಬುದನ್ನು ನಾವೇ ಅನೌನ್ಸ್‌ ಮಾಡುತ್ತೆವೆ. ಇನ್ನೂ ಅದರ ಬಗ್ಗೆ ಸ್ಪಷ್ಟನೆ ಇಲ್ಲ" ಎಂದು ಹೇಳಿಕೆ ನೀಡಿದ್ದಾರೆ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Read More