Home> Health
Advertisement

ಮಧುಮೇಹಿಗಳಿಗೆ ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ..ಇದು ಕಿಡ್ನಿ ಸೊಂಕಿರಬಹುದು..!

ಮೂತ್ರಪಿಂಡದ ಸೋಂಕಿನ ಸಾಮಾನ್ಯ ಕಾರಣವೆಂದರೆ ಅದು ಮಧುಮೇಹ.ಮಧುಮೇಹಿಗಳಲ್ಲಿ ಅಧಿಕ ರಕ್ತ ಮತ್ತು ಸಕ್ಕರೆ ಮಟ್ಟ ಇರುತ್ತದೆ.

ಮಧುಮೇಹಿಗಳಿಗೆ ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ..ಇದು ಕಿಡ್ನಿ ಸೊಂಕಿರಬಹುದು..!

ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಾ ಹೋದಂತೆ ಮೂತ್ರಪಿಂಡದ ಸೋಂಕುಗಳು ಹೆಚ್ಚಾಗುವ ಸಾದ್ಯತೆ ಇದೆ.ಅದರಲ್ಲಿಯೂ ಮಧುಮೇಹಿಗಳಿಗೆ ಈ ಮೂತ್ರಪಿಂಡದ ಸೋಂಕಿನ ಸಮಸ್ಯೆ ಬಹಳಬೇಗ ತಗಲುವ ಸಾದ್ಯತೆ ಇದೆ.ಈ ಸಮಸ್ಯೆ ಕಾಣಿಸಿಕೊಳ್ಳುವ ಮೊದಲು ದೇಹದದಲ್ಲಿ ಕೆಲವು ಬದಲಾವಣೆ ಕಾಣಿಸಿಕೊಳ್ಳುತ್ತದೆ.ಇವು ಕಿಡ್ನಿ ಸೋಂಕಿನ ಮುನ್ಸೂಚನೆಯ ಗುಣ ಲಕ್ಷಣಗಳಾಗಿವೆ.

ಆರೋಗ್ಯವಂತ ವ್ಯಕ್ತಿಯಲ್ಲಿ ಮೂತ್ರಪಿಂಡದ ಸೋಂಕುಗಳು ಕಾಣಿಸಿಕೊಳ್ಳುವುದು ಬಹಳ ಅಪರೂಪ, ಆದರೂ ಸಹ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಇಂತಹ ಸಮಸ್ಯೆಗಳು ಪರಿಣಾಮಕಾರಿ ಆರೋಗ್ಯ ಅಪಾಯಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚು.ಅದರಲ್ಲಿಯೂ ಮಧುಮೇಹದಂತಹ ರೋಗವನ್ನು ಹೊಂದಿರುವ ವ್ಯಕ್ತಿಗಳಲ್ಲಿ ಅಥವಾ ತೀವ್ರ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವವರಲ್ಲಿ ಈ ಸೋಂಕುಗಳು ವಿಶೇಷವಾಗಿ ಕಂಡುಬರುತ್ತವೆ.

ಇದನ್ನೂ ಓದಿ : 500 ವರ್ಷ ಬಳಿಕ ಈ 4 ರಾಶಿಗಳಿಗೆ ಬಂಪರ್ ಲಾಟರಿ.. ಯುಗಾದಿಗೂ ಮೊದಲೇ ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಸಂಪತ್ತು, ಅಷ್ಟೈಶ್ವರ್ಯ ಪ್ರಾಪ್ತಿ.. ಬ್ರಹ್ಮಾಂಡ ಯಶಸ್ಸು!

ಈ ಅಪರೂಪದ ರೋಗವನ್ನು ಮುಂಚಿತವಾಗಿಯೇ ಕಾಣಿಸಿಕೊಳ್ಳುವ ಗುಣಲಕ್ಷಣಗಳ ಅಧಾರದ ಮೇಲೆ ಗುರುತಿಸಿ ಮತ್ತು ಅವುಗಳನ್ನು ಹೇಗೆ ತಡೆಗಟ್ಟುವುದು ಎಂಬುದನ್ನು ಅರಿವು ಮೂಡಿಸುವುದರ ಮೂಲಕ ಆದಷ್ಟು ಈ ಸಮಸ್ಯೆಯಿಂದ ಪಾರಾಗುವುದರೊಂದಿಗೆ ಮನುಷ್ಯನ ಆರೋಗ್ಯವನ್ನು ಸುಧಾರಿಸಬಹುದು.

ಇನ್ನು ಈ ರೀತಿಯ ಕಿಡ್ನಿ ಸೋಂಕುಗಳು ಸಾಮಾನ್ಯವಾಗಿ ಮಧುಮೇಹ, ಏಡ್ಸ್ ಅಥವಾ ಕ್ಯಾನ್ಸರ್‌ನಂತಹ ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳ ಮೇಲೆ ತೀವ್ರತರನಾದ ಪರಿಣಾಮ ಬೀರುತ್ತವೆ.

ಮೂತ್ರಪಿಂಡದ ಸೊಂಕಿಗೆ ಕಾರಣ:

ರೋಗನಿರೋಧಕ ಶಕ್ತಿ ದುರ್ಬಲಗೊಂಡ ದೇಹದಲ್ಲಿ ಈ ರೀತಿಯ ಸೊಂಕುಗಳು ಹೆಚ್ಚಾಗುತ್ತವೆ.ಮೂತ್ರಪಿಂಡದ ಸೋಂಕಿನ ಸಾಮಾನ್ಯ ಕಾರಣವೆಂದರೆ ಅದು ಮಧುಮೇಹ.ಮಧುಮೇಹಿಗಳಲ್ಲಿ ಅಧಿಕ ರಕ್ತ ಮತ್ತು ಸಕ್ಕರೆ ಮಟ್ಟ ಇರುತ್ತದೆ.ದುರ್ಬಲಗೊಂಡ ರೋಗನಿರೋಧಕ ದೇಹವು ಸೊಂಕು ಬೆಳೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ.ವಿಶೇಷವಾಗಿ ಕೋವಿಡ್ ನಂತಹ ತೀವ್ರವಾದ ಕಾಯಿಲೆಗಳು ರೋಗನಿರೋಧಕ ಶಕ್ತಿಯನ್ನು ಗಮನಾರ್ಹವಾಗಿ ದುರ್ಬಲಗೊಳಿಸಿದೆ. 

ಇದನ್ನೂ ಓದಿ: ವಾಹನಗಳ ಮೇಲೆ ಪೊಲೀಸ್ ಅಂತಾ ಬರೆಸಿಕೊಳ್ಳುವಂತಿಲ್ಲ: ಗೃಹ ಸಚಿವ ಡಾ ಜಿ ಪರಮೇಶ್ವರ್

ಕಿಡ್ನಿ ಸೊಂಕಿನ ಲಕ್ಷಣಗಳು:

-ಮೂತ್ರ ವಿಸರ್ಜಿಸುವಾಗ ಉರಿ 
-ಅಗ್ಗಾಗ್ಗೆ ಮೂತ್ರವಿಸರ್ಜನೆ
-ಪಕ್ಕೆಲುಬಿನ ನೋವು
-ವಾಂತಿ
-ಜ್ವರ

ಈ ರೀತಿಯ ಸಮಸ್ಯೆಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.ಕೆಲವೊಮ್ಮೆ ತೀವ್ರತರವಾದ ಪ್ರಕರಣಗಳಲ್ಲಿ, ಪಾರ್ಶ್ವಗಳ ಮೇಲಿನ ಚರ್ಮವು ಗಟ್ಟಿಯಾಗಿ ಬಣ್ಣ ಕಳೆದುಕೊಳ್ಳಬಹುದು, ಇದು ಹೆಚ್ಚಾಗಿ ಕಪ್ಪು ಶಿಲೀಂಧ್ರ ಎಂದೂ ಕರೆಯಲ್ಪಡುವ ಮ್ಯೂಕೋರ್ ಶಿಲೀಂಧ್ರದಿಂದ ಉಂಟಾಗುತ್ತದೆ.ತೀವ್ರತರವಾದ ಸಂದರ್ಭಗಳಲ್ಲಿ, ಸೋಂಕುಗಳು ಅಪಾಯಕಾರಿಯಾದಾಗ  ರಕ್ತದೊತ್ತಡಕ್ಕೆ ಕಾರಣವಾಗಬಹುದು. ಇಂತಹ ಸಮಸ್ಯೆಗಳು ಕಂಡುಬಂದಲ್ಲಿ ಉನ್ನತ ಮಟ್ಟದ ಚಿಕಿತ್ಸೆ ಮುಖ್ಯ.

ಸೂಚನೆ: ಈ ಮೇಲಿನ ಮಾಹಿತಿಯನ್ನು ಸಾಮಾನ್ಯ ಜ್ಞಾನದ ಆಧಾರದ ಮೇಲೆ ನೀಡಲಾಗಿದೆ.ಇದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸಿ.ಜೀ ಕನ್ನಡ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

 

Read More