Chanakya Niti Tips to Save Money: ಬದುಕಲು ಅತ್ಯಂತ ಮುಖ್ಯವಾದ ವಿಷಯವೆಂದರೆ ಹಣ. ಪ್ರಸ್ತುತ ದಿನಮಾನದಲ್ಲಿ ಹಣವಿಲ್ಲದೆ ಮನುಷ್ಯ ಏನೂ ಅಲ್ಲ ಎಂಬಂತಾಗಿದೆ. ಅನೇಕ ಪ್ರಯತ್ನಗಳ ನಂತರವೂ ಮನೆಯಲ್ಲಿ ಹಣ ಉಳಿಯದೆ ಕಷ್ಟಪಡುವ ಅನೇಕರ ಬಗ್ಗೆ ತಿಳಿದಿರಬಹುದು. ಅಂತಹ ಜನರ ಮನೆಗಳ ಆರ್ಥಿಕ ಪರಿಸ್ಥಿತಿ ಯಾವಾಗಲೂ ಕೆಟ್ಟದಾಗಿರುತ್ತದೆ. ಆದರೆ ಜಗತ್ತಿನಲ್ಲಿ ಸುಧಾರಣೆಗೆ ಯಾವಾಗಲೂ ಅವಕಾಶವಿದೆ. ಆಚಾರ್ಯ ಚಾಣಕ್ಯನು ಒಬ್ಬ ವ್ಯಕ್ತಿಯು ತನ್ನ ಆರ್ಥಿಕ ಸ್ಥಿತಿಯನ್ನು ಹೇಗೆ ಸುಧಾರಿಸಿಕೊಳ್ಳಬಹುದು ಮತ್ತು ಕೆಲವೇ ದಿನಗಳಲ್ಲಿ ಹೇಗೆ ಶ್ರೀಮಂತನಾಗಬಹುದು ಎಂಬುದನ್ನು ಹೇಳಿದ್ದಾರೆ.
ವ್ಯರ್ಥ ಖರ್ಚು: ಹಣ ಉಳಿಸಲು ಪ್ರಾರಂಭಿಸಿದಾಗ ಮಾತ್ರ ಒಬ್ಬರು ಶ್ರೀಮಂತರಾಗಲು ಸಾಧ್ಯ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿದಾಗ ಮಾತ್ರ ಹಣವನ್ನು ಉಳಿಸಬಹುದು. ದುಂದು ವೆಚ್ಚವು ಎಂದಿಗೂ ಸ್ಥಿರತೆಯನ್ನು ತರುವುದಿಲ್ಲ ಮತ್ತು ವ್ಯರ್ಥ ಮಾಡುವ ಜನರ ಆರ್ಥಿಕ ಸ್ಥಿತಿ ಯಾವಾಗಲೂ ಕೆಟ್ಟದಾಗಿರುತ್ತದೆ. ಚಾಣಕ್ಯ ನೀತಿಯಲ್ಲಿ, ವ್ಯರ್ಥ ಖರ್ಚು ಬಡತನಕ್ಕೆ ದೊಡ್ಡ ಕಾರಣ ಎಂದು ಹೇಳಲಾಗಿದೆ.
ತಪ್ಪು ಹೂಡಿಕೆ: ಕೆಲವೊಮ್ಮೆ ತಪ್ಪು ಹೂಡಿಕೆಯೂ ತೊಂದರೆಗೆ ಕಾರಣವಾಗಬಹುದು. ಆದ್ದರಿಂದ, ಹೂಡಿಕೆಯನ್ನು ಯಾವಾಗಲೂ ಬುದ್ಧಿವಂತಿಕೆಯಿಂದ ಮಾಡಬೇಕು. ಹೀಗೆ ಮಾಡದಿದ್ದರೆ ಭಾರಿ ನಷ್ಟ ಅನುಭವಿಸಬೇಕಾಗುತ್ತದೆ ಮತ್ತು ಅದನ್ನು ಸರಿದೂಗಿಸುವುದು ಅಷ್ಟು ಸುಲಭವಲ್ಲ. ಹೂ
ದುರಹಂಕಾರ: ದುರಹಂಕಾರಿ ವ್ಯಕ್ತಿ ತನ್ನ ಜೀವನದಲ್ಲಿ ಸಂಬಂಧಗಳನ್ನು ಕಳೆದುಕೊಳ್ಳುವುದಲ್ಲದೆ ಸಂಪತ್ತನ್ನೂ ಕಳೆದುಕೊಳ್ಳುತ್ತಾನೆ. ಆದ್ದರಿಂದ, ಒಬ್ಬ ವ್ಯಕ್ತಿಯು ತನ್ನ ಅಹಂಕಾರವನ್ನು ತ್ಯಜಿಸುವುದು ಬಹಳ ಮುಖ್ಯ. ಅಹಂಕಾರ ಇರುವಲ್ಲಿ ಲಕ್ಷ್ಮಿ ದೇವಿಯು ಎಂದಿಗೂ ವಾಸಿಸುವುದಿಲ್ಲ. ಮತ್ತು ಲಕ್ಷ್ಮಿ ದೇವಿಯು ಎಲ್ಲಿ ವಾಸಿಸುತ್ತಾಳೋ ಅಲ್ಲಿ ಸಂಪತ್ತು ಬರುತ್ತದೆ.
ತಪ್ಪು ಹೊಂದಾಣಿಕೆ: ಒಬ್ಬ ವ್ಯಕ್ತಿಯು ಸ್ನೇಹ ಅಥವಾ ವ್ಯವಹಾರದಲ್ಲಿ ತಪ್ಪು ವ್ಯಕ್ತಿಯನ್ನು ಆರಿಸಿಕೊಂಡರೆ ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ತಪ್ಪು ಸಹವಾಸದಿಂದಾಗಿ ಒಬ್ಬ ವ್ಯಕ್ತಿಯು ನಕಾರಾತ್ಮಕ ಪ್ರಭಾವಕ್ಕೆ ಒಳಗಾಗುತ್ತಾನೆ. ಒಬ್ಬ ವ್ಯಕ್ತಿಯು ಜೀವನ ಮತ್ತು ಸಂಬಂಧಿತ ಅಂಶಗಳಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವಲ್ಲಿ ತಪ್ಪುಗಳನ್ನು ಮಾಡಲು ಪ್ರಾರಂಭಿಸುತ್ತಾನೆ ಮತ್ತು ಇದೆಲ್ಲವೂ ಅವನ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಬೆಳಿಗ್ಗೆ ಎದ್ದಾಕ್ಷಣ ಈ ಸಮಸ್ಯೆಗಳು ಕಾಡುತ್ತಿವೆಯೇ? ಥೈರಾಯ್ಡ್ ಇರಬಹುದು ಎಚ್ಚರ..!
ಕಹಿ ಮಾತುಗಳು: ಮಾತಿನ ಸೌಂದರ್ಯವು ಮಾನವ ನಡವಳಿಕೆಯ ಪ್ರತಿಬಿಂಬವಾಗಿದೆ. ನಿಮ್ಮ ಮಾತಿನಲ್ಲಿ ಸೌಮ್ಯತೆ ಇಲ್ಲದಿದ್ದರೆ ಅದು ನಿಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಕಠಿಣ ಮಾತುಗಳನ್ನಾಡುವ ಜನರಿಂದ ಯಶಸ್ಸು ಓಡಿಹೋಗುತ್ತದೆ ಮತ್ತು ಸಿಹಿಯಾಗಿ ಮಾತನಾಡುವವರು ಅದರಿಂದ ಹೆಚ್ಚಿನ ಲಾಭ ಪಡೆಯುತ್ತಾರೆ. ಲಕ್ಷ್ಮಿ, ಸರಸ್ವತಿ ಮತ್ತು ಕುಬೇರ ಎಲ್ಲರೂ ಸಂತೋಷವಾಗಿ, ಆ ವ್ಯಕ್ತಿಯ ಜೀವನ ಬದಲಾಗುತ್ತದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.