ತುಳಸಿ ಅಂದರೆ ಸಾಕ್ಷಾತ್ ಲಕ್ಷ್ಮೀ ಸ್ವರೂಪ. ಹಾಗಾಗಿ ಅದರ ಬಳಿ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು. ಇಲ್ಲವಾದರೆ ತಾಯಿ ಲಕ್ಷ್ಮೀ ಮುನಿಸಿಕೊಳ್ಳುತ್ತಾಳೆ.
ತುಳಸಿ ಗಿಡಕ್ಕೆ ಪ್ರತಿನಿತ್ಯ ನೀರು ಅರ್ಪಿಸಿದರೆ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ. ಲಕ್ಷ್ಮೀ ದೇವಿ ಪ್ರಸನ್ನಳಾಗಿ ಒಲಿದರೆ ಮನೆ ಮತ್ತು ಮನೆ ಮಂದಿಯವರ ಮೇಲೆ ಆಕೆಯ ಅನುಗ್ರಹ ಇರುತ್ತದೆ.
ತುಳಸಿ ಅಂದರೆ ಸಾಕ್ಷಾತ್ ಲಕ್ಷ್ಮೀ ಸ್ವರೂಪ. ಹಾಗಾಗಿ ಅದರ ಬಳಿ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು. ಇಲ್ಲವಾದರೆ ತಾಯಿ ಲಕ್ಷ್ಮೀ ಮುನಿಸಿಕೊಳ್ಳುತ್ತಾಳೆ.
ತುಳಸಿ ಗಿಡದ ಬಳಿ ಅಥವಾ ಸುತ್ತ ಮುತ್ತ ಸ್ವಲ್ಪವೂ ಗಲೀಜು ಇರಬಾರದು. ಈ ಜಾಗವನ್ನು ನಿತ್ಯ ಶುಚಿಗೊಳಿಸುತ್ತಾ ಇರಬೇಕು.ಕಸ ಕಡ್ಡಿಗಳು ತುಳಸಿ ಬಳಿ ಇರದಂತೆ ನೋಡಿಕೊಳ್ಳಬೇಕು.
ಇನ್ನು ತುಳಸಿ ಗಿಡದ ಬಳಿ ಪೊರಕೆ ಇಡಬಾರದು. ತುಳಸಿ ಬಳಿ ಪೊರಕೆ ಇಡುವುದರಿಂದ ಮನೆಯೊಳಗೆ ಬಡತನ ಹೊಕ್ಕಿ ಬಿಡುತ್ತದೆ ಎನ್ನುವ ನಂಬಿಕೆ ಇದೆ.
ತುಳಸಿ ಇರುವಲ್ಲಿ ಶೂ ಮತ್ತು ಚಪ್ಪಲಿಗಳನ್ನು ಕೂಡಾ ಬಿಡಬಾರದು. ತುಳಸಿ ಬಳಿ ಶೂ, ಚಪ್ಪಲಿ ಬಿಡುವುದರಿಂದ ಆರೋಗ್ಯ ಸಮಸ್ಯೆ ಕಾಡುತ್ತದೆ.
ಇನ್ನು ಮುಖ್ಯವಾದ ವಿಚಾರ ಎಂದರೆ ತುಳಸಿ ಗಿಡದ ಬಳಿ ಅಥವಾ ಸುತ್ತ ಮುತ್ತ ಯಾವುದೇ ರೀತಿಯ ಮುಳ್ಳಿನ ಗಿಡಗಳನ್ನು ನೆಡಬಾರದು. ಇದು ಮನೆಯೊಳಗೆ ನೆಗೆಟಿವ್ ಎನರ್ಜಿ ಹರಿದು ಬರಲು ಕಾರಣವಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.