Guru Chandra Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ತಿಂಗಳಾಂತ್ಯದಲ್ಲಿ ಅತ್ಯಂತ ಮಂಗಳಕರ ಯೋಗ ನಿರ್ಮಾಣವಾಗಲಿದೆ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸದ್ಯ ವೃಷಭ ರಾಶಿಯಲ್ಲಿರುವ ದೇವಗುರು ಬೃಹಸ್ಪತಿ 14 ಮೇ 2025ರ ರಾತ್ರಿ 11:20ಕ್ಕೆ ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ. ಮೇ 28ರಂದು ಮನಸ್ಸಿನಕಾರಕ ಚಂದ್ರ ಕೂಡ ಮಿಥುನ ರಾಶಿಗೆ ಪದಾರ್ಪಣೆ ಮಾಡುವುದರಿಂದ ಅತ್ಯಂತ ಶಕ್ತಿಶಾಲಿ 'ಗಜಕೇಸರಿ ಯೋಗ' ನಿರ್ಮಾಣವಾಗಲಿದೆ.
ಮೇ 28ರಿಂದ ಸುಮಾರು 52ಗಂಟೆಗಳ ಕಾಲ ಎಂದರೆ ಮೇ 30ರವರೆಗಿರುವ ಈ ಶಕ್ತಿಶಾಲಿ ಗಜಕೇಸರಿ ಯೋಗದಿಂದಾಗಿ ಕೆಲವು ರಾಶಿಯವರಿಗೆ ಅಚ್ಚೇದಿನ್ ಆರಂಭವಾಗಲಿದೆ. ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸುವರ್ಣ ಸಮಯ ಎನ್ನಲಾಗುತ್ತಿದೆ.
ವೃಷಭ ರಾಶಿ: ಗಜಕೇಸರಿ ಯೋಗದಿಂದಾಗಿ ಈ ರಾಶಿಯವರಿಗೆ ವ್ಯವಹಾರದಲ್ಲಿ ಭರ್ಜರಿ ಲಾಭವಾಗಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸಂಭಾವವಿದೆ. ಹಣಕಾಸಿನ ಮೂಲಗಳು ಹೆಚ್ಚಾಗುವುದರಿಂದ ಆರ್ಥಿಕ ಸಮೃದ್ಧಿ ತರಲಿದೆ.
ಸಿಂಹ ರಾಶಿ: ಗಜಕೇಸರಿ ಯೋಗದೊಂದಿಗೆ ಈ ರಾಶಿಯವರ ಬದುಕಿನಲ್ಲಿ ಕಷ್ಟಗಳು ಕಳೆದು ಶುಭ ದಿನಗಳು ಆರಂಭವಾಗಲಿವೆ. ಹಣಕಾಸಿನ ಸ್ಥಿತಿಯಲ್ಲಿ ಗಮನಾರ್ಹ ಪ್ರಗತಿ ಕಾಣಲಿದ್ದು, ವೃತ್ತಿಪರರಿಗೆ ಪ್ರಮೋಷನ್ ಸಂಭವವಿದೆ.
ವೃಶ್ಚಿಕ ರಾಶಿ: ತಿಂಗಳಾಂತ್ಯದಲ್ಲಿ ನಿರ್ಮಾಣವಾಗಲಿರುವ ಗಜಕೇಸರಿ ಯೋಗವು ಈ ರಾಶಿಯವರಿಗೆ ವ್ಯವಹಾರದಲ್ಲಿ ಭರ್ಜರಿ ಲಾಭವಾಗಲಿದೆ. ಉದ್ಯೋಗ ಸ್ಥಳದಲ್ಲಿ ಪರಿಸ್ಥಿತಿ ಬಲವಾಗಿರಲಿದ್ದು ಬಡ್ತಿ ಸಂಭವವಿದೆ. ಜೊತೆಗೆ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗಲಿದೆ. ಹೊಸ ಮನೆ ಖರೀದಿ ಯೋಗವಿದೆ.
ಕುಂಭ ರಾಶಿ: ಗಜಕೇಸರಿ ಯೋಗವು ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಭಾರೀ ಲಾಭ, ಯಶಸ್ಸನ್ನು ನೀಡಲಿದೆ. ಹೂಡಿಕೆಯಿಂದ ಉತ್ತಮ ಲಾಭ ಗಳಿಸುವಿರಿ. ಹಣಕಾಸಿನ ಮೂಲಗಳು ಹೆಚ್ಚಾಗಿ, ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ಮೀನ ರಾಶಿ: ಗಜಕೇಸರಿ ಯೋಗದಿಂದ ಈ ರಾಶಿಯವರಿಗೆ ಮನಸ್ಸು ಶಾಂತಗೊಳ್ಳಲಿದ್ದು, ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ವೃತ್ತಿಪರರಿಗೆ ಪ್ರಮೋಷನ್ ಸಿಗಲಿದೆ. ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ದಿಢೀರ್ ಧನಲಾಭದಿಂದ ಆರ್ಥಿಕ ಮುಗ್ಗಟ್ಟಿನಿಂದ ಪರಿಹಾರ ದೊರೆಯಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.