Home> Spiritual
Advertisement

ಅಡುಗೆಮನೆಯಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ: ನಿಮ್ಮ ಸಂಪತ್ತು-ಸಮೃದ್ಧಿ ಖಾಲಿಯಾಗುತ್ತೆ ಎಚ್ಚರ!!

ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಅಡುಗೆಮನೆಯಲ್ಲಿ ಕೆಲವು ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಈ ತಪ್ಪುಗಳು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

ಅಡುಗೆಮನೆಯಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ: ನಿಮ್ಮ ಸಂಪತ್ತು-ಸಮೃದ್ಧಿ ಖಾಲಿಯಾಗುತ್ತೆ ಎಚ್ಚರ!!

Vastu Tips for House: ಪೂಜಾ ಸ್ಥಳದ ನಂತರ ಮನೆಯ ಅಡುಗೆಮನೆಯು ಅತ್ಯಂತ ಮುಖ್ಯವಾದ ಸ್ಥಳವಾಗಿದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಅನ್ನಪೂರ್ಣ ಮಾತೆ ಕೂಡ ಅಡುಗೆಮನೆಯಲ್ಲಿ ವಾಸಿಸುತ್ತಾಳೆ. ಆದ್ದರಿಂದ ನೀವು ಅಡುಗೆಮನೆಯಲ್ಲಿ ಅನುಸರಿಸಬೇಕಾದ ಕೆಲವು ವಾಸ್ತು ನಿಯಮಗಳಿವೆ. ವಾಸ್ತು ಪ್ರಕಾರ, ಅಡುಗೆಮನೆಯಲ್ಲಿ ಮಾಡುವ ಕೆಲವು ತಪ್ಪುಗಳು ನಿಮ್ಮ ಜೀವನದಲ್ಲಿ ನಕಾರಾತ್ಮಕತೆಯನ್ನು ಹರಡಬಹುದು. ಈ ತಪ್ಪುಗಳಿಂದ ನಿಮ್ಮ ಸಂಪತ್ತು ಮತ್ತು ಆಹಾರದ ಉಗ್ರಾಣವೂ ಖಾಲಿಯಾಗುತ್ತದೆ. 

ಶೂ ಮತ್ತು ಚಪ್ಪಲಿ  

ವಾಸ್ತು ಶಾಸ್ತ್ರದ ಪ್ರಕಾರ, ನೀವು ಮನೆಯ ಅಡುಗೆಮನೆಗೆ ಶೂಗಳು ಮತ್ತು ಚಪ್ಪಲಿಗಳನ್ನು ಅಪ್ಪಿತಪ್ಪಿಯೂ ತೆಗೆದುಕೊಂಡು ಹೋಗಬಾರದು. ಹೀಗೆ ಮಾಡುವುದರಿಂದ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅನ್ನಪೂರ್ಣ ದೇವಿಯು ಅಡುಗೆಮನೆಗೆ ಚಪ್ಪಲಿಗಳನ್ನು ತೆಗೆದುಕೊಂಡು ಹೋಗುವುದರಿಂದ ಕೋಪಗೊಳ್ಳುತ್ತಾಳೆ. ಇದರ ಜೊತೆಗೆ ನೀವು ಅಡುಗೆಮನೆಯ ಸುತ್ತಲೂ ಶೂಗಳು ಮತ್ತು ಚಪ್ಪಲಿಗಳನ್ನು ಇಡುವುದನ್ನು ತಪ್ಪಿಸಬೇಕು. 

ಇದನ್ನೂ ಓದಿ: 100 ವರ್ಷಗಳ ನಂತರ ವಿಪರೀತ ರಾಜಯೋಗ: ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುವುದು ಖಚಿತ..!!

ಕೊಳಕು ಪಾತ್ರೆಗಳನ್ನು ಬಿಡಬೇಡಿ 

ಅನೇಕ ಜನರು ಊಟದ ನಂತರ ಪಾತ್ರೆಗಳನ್ನು ಅಡುಗೆಮನೆಯಲ್ಲಿ ಇಡುತ್ತಾರೆ. ನಂತರ ಗಂಟೆಗಟ್ಟಲೆ ಅವುಗಳನ್ನ ತೊಳೆಯುವುದಿಲ್ಲ. ಕೆಲವರು ರಾತ್ರಿಯಲ್ಲಿ ಪಾತ್ರೆಗಳನ್ನು ತೊಳೆಯದೆಯೇ ಮಲಗುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಹೀಗೆ ಮಾಡುವುದರಿಂದ ಮನೆಯೊಳಗೆ ನಕಾರಾತ್ಮಕತೆ ಬರುತ್ತದೆ ಮತ್ತು ಜೀವನದಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ನೀವು ಊಟ ಮಾಡಿದ ತಕ್ಷಣ ಪಾತ್ರೆಗಳನ್ನು ತೊಳೆಯಬೇಕು. ಅಲ್ಲದೆ ರಾತ್ರಿಯಲ್ಲಿ ಪಾತ್ರೆಗಳನ್ನು ತೊಳೆಯದೆ ಮಲಗುವುದನ್ನು ತಪ್ಪಿಸಬೇಕು. 

ಅಡುಗೆಮನೆಯಲ್ಲಿ ಊಟ ಮಾಡಬೇಡಿ 

ವಾಸ್ತು ಶಾಸ್ತ್ರದ ಪ್ರಕಾರ, ನೀವು ಅಡುಗೆಮನೆಯಲ್ಲಿ ಊಟ ಮಾಡುವುದನ್ನು ತಪ್ಪಿಸಬೇಕು. ಅಡುಗೆಮನೆಯಲ್ಲಿ ತಯಾರಿಸಿದ ಆಹಾರವನ್ನು ಬೇರೆ ಸ್ಥಳಕ್ಕೆ ತೆಗೆದುಕೊಂಡು ಹೋಗಿ ತಿನ್ನಬಹುದು. ಅಡುಗೆಮನೆಯಲ್ಲಿ ಊಟ ಮಾಡುವುದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು. ನೀವು ಆರ್ಥಿಕವಾಗಿಯೂ ದುರ್ಬಲರಾಗುತ್ತೀರಿ.

ನಲ್ಲಿಯಿಂದ ನೀರು ಸೋರಬಾರದು

ಅಡುಗೆಮನೆಯಲ್ಲಿ ನಲ್ಲಿ ಇದ್ದರೆ, ಅದರಿಂದ ನೀರು ತೊಟ್ಟಿಕ್ಕಬಾರದು. ನೀರು ಹೀಗೆ ತೊಟ್ಟಿಕ್ಕುವುದರಿಂದ ನಿಮ್ಮ ಸಂಪತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ನೀವು ಬಡವರಾಗಬಹುದು. ಇದರೊಂದಿಗೆ ಅಡುಗೆಮನೆಯಲ್ಲಿ ಯಾವಾಗಲೂ ನೀರಿನ ಪಾತ್ರೆಗಳನ್ನು ಮುಚ್ಚಿಡಿ. ಹೀಗೆ ಮಾಡುವುದರಿಂದ ಕಲ್ಮಶಗಳು ನೀರಿನಲ್ಲಿ ಸೇರುವುದಿಲ್ಲ ಮತ್ತು ನೀವು ವಾಸ್ತು ದೋಷಗಳನ್ನು ಸಹ ತಪ್ಪಿಸುತ್ತೀರಿ.

ಇದನ್ನೂ ಓದಿ: 800 ವರ್ಷಗಳ ನಂತರ ಭದ್ರ ಪುರುಷ ಮಹಾರಾಜಯೋಗ: ಈ ನಾಲ್ಕು ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ, ಹೊಡೆಯಲಿದೆ ಜಾಕ್‌ಪಾಟ್!!

 (ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Read More