ಜೂನ್ 26, 2025: ಕನ್ಯಾ, ತುಲಾ, ವೃಶ್ಚಿಕ, ಧನುಸ್ಸು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ
Daily Horoscope 26 June 2025: ಇಂದಿನ ದಿನ ಭವಿಷ್ಯ ಜೂನ್ 25, 2025
ಕನ್ಯಾ ರಾಶಿಯವರ ಭವಿಷ್ಯ :
ಏಕಾದಶಾಧಿಪತಿ ಕರ್ಮ ಸ್ಥಾನದಲ್ಲಿರುವುದರಿಂದ ತುಂಬಾ ವಿಶೇಷವಾದ ದಿನ. ಉದ್ಯೋಗ ಕ್ಷೇತ್ರದಲ್ಲಿ ಸಾಫ್ಟ್ ಕಾರ್ನರ್ ನಿಂದ ವರ್ತಿಸುವುದು ಸೂಕ್ತವಲ್ಲ. ಈ ಒಂದು ವಿಚಾರದಲ್ಲಿ ತುಂಬಾ ಸೂಕ್ಷ್ಮತೆಯಿಂದ ಕೆಲಸ ಮಾಡಿ.
ತುಲಾ ರಾಶಿಯವರ ಭವಿಷ್ಯ:
ಕರ್ಮ ಸ್ಥಾನಾಧಿಪತಿ ಭಾಗ್ಯದಲ್ಲಿ ಕುಳಿತಿದ್ದಾನೆ. ಇದರಿಂದ ದಿನ ಉತ್ತಮವಾಗಿದೆ. ಆದರೆ, ಹಿಂದೆ ನೀವು ಮಾಡಿರುವ ತಪ್ಪು ಅಥವಾ ಹಣಕಾಸಿನ ವಿಚಾರದಲ್ಲಿ ಯಾರೋ ಮಾಡಿರುವ ತಪ್ಪುಗಳಿಗೆ ಇಂದು ನೀವು ತಲೆಕೊಡಬೇಕಾಗಬಹುದು.
ಇಂದು ಕಚೇರಿಯಲ್ಲಿ ಮೊದಲು ಲೆಕ್ಕಪತ್ರಗಳನ್ನು ಪರಿಶೀಲಿಸಿ.
ವೃಶ್ಚಿಕ ರಾಶಿಯವರ ಭವಿಷ್ಯ:
ಭಾಗ್ಯಾಧಿಪತಿ ಅಷ್ಟಮದಲ್ಲಿ ಕುಳಿತಿರುವುದರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕಾದ ದಿನ. ಇಲ್ಲವೇ, ಅವಕಾಶಗಳು ಕೈತಪ್ಪಿ ಹೋಗುವ ಸಂಭವವಿರುತ್ತದೆ. ಇದರ ಹಿಂದೆ ಬೇರೆಯವರ ಪಿತೂರಿ ಇರುತ್ತದೆ. ಸೂಕ್ಷ್ಮತೆಯಿಂದ ಇದನ್ನು ಗ್ರಹಿಸಿದರೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
ಧನು ರಾಶಿಯವರ ಭವಿಷ್ಯ:
ಆರನೇ ಮನೆಯ ಅಧಿಪತಿ ಇಂದು ಸಪ್ತಮದಲ್ಲಿರುವ ವಿಶೇಷ ಸನ್ನಿವೇಶ ಕಾಣುತ್ತಿದ್ದು, ನಿಮ್ಮವರಿಂದಲೇ ನಷ್ಟ, ತೊಂದರೆ ಸಾಧ್ಯತೆ ಇದೆ. ಹೊಸದಾಗಿ ಆರಂಭಿಸಿರುವ ಜಂಟಿ ವ್ಯವಹಾರದಲ್ಲಿ ಭಾರೀ ನಷ್ಟ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಿ.
ಮಕರ ರಾಶಿಯವರ ಭವಿಷ್ಯ:
ಸಪ್ತಮಾಧಿಪತಿ ಷಷ್ಟದಲ್ಲಿದ್ದಾನೆ. ಅದೇ ರೀತಿ ದ್ವಿತೀಯದಲ್ಲಿ ರಾಹು ಅಷ್ಟಮದಲ್ಲಿ ಕುಜ-ಕೇತು ಇರುವುರಿಂದ ಎಚ್ಚರಿಕೆಯಿಂದ ಇರಬೇಕಾದ ದಿನ. ಎಷ್ಟೇ ಹಣ ಬಂದರೂ ಕೈಯಲ್ಲಿ ಹಣ ನಿಲ್ಲುವುದಿಲ್ಲ.
ಕುಂಭ ರಾಶಿಯವರ ಭವಿಷ್ಯ:
ಷಷ್ಟಾಧಿಪತಿ ಇಂದು ಪಂಚಮದಲ್ಲಿರುವುದರಿಂದ ವಿದ್ಯಾರ್ಥಿಗಳು ಇಂದು ಎಚ್ಚರಿಕೆಯಿಂದ ಇರಬೇಕು. ಇಂದು ನಿಮ್ಮ ಹೆಸರು, ಜನಪ್ರಿಯತೆಗೆ ವಿರುದ್ಧವಾಗಿ ನಡೆದುಕೊಳ್ಳುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಜಾಗರೂಕರಾಗಿರಿ.
ಮೀನ ರಾಶಿಯವರ ಭವಿಷ್ಯ :
ಪಂಚಮಾಧಿಪತಿ ಇಂದು ಚತುರ್ಥದಲ್ಲಿರುವುದರಿಂದ ದೊಡ್ಡ ಮಟ್ಟದ ಪ್ರಯತ್ನಗಳಿಂದ ದೂರ ಉಳಿಯುವುದು ಒಳ್ಳೆಯದು. ಇಲ್ಲವೇ ನಕಾರಾತ್ಮಕ ಫಲಿತಾಂಶಗಳು ಹೆಚ್ಚಾಗಬಹುದು.
Yashaswini V|Updated: Jun 26, 2025, 11:15 AM IST
Daily Horoscope 26 June 2025: ಇಂದಿನ ದಿನ ಭವಿಷ್ಯ ಜೂನ್ 25, 2025
ಕನ್ಯಾ ರಾಶಿಯವರ ಭವಿಷ್ಯ :
ಏಕಾದಶಾಧಿಪತಿ ಕರ್ಮ ಸ್ಥಾನದಲ್ಲಿರುವುದರಿಂದ ತುಂಬಾ ವಿಶೇಷವಾದ ದಿನ. ಉದ್ಯೋಗ ಕ್ಷೇತ್ರದಲ್ಲಿ ಸಾಫ್ಟ್ ಕಾರ್ನರ್ ನಿಂದ ವರ್ತಿಸುವುದು ಸೂಕ್ತವಲ್ಲ. ಈ ಒಂದು ವಿಚಾರದಲ್ಲಿ ತುಂಬಾ ಸೂಕ್ಷ್ಮತೆಯಿಂದ ಕೆಲಸ ಮಾಡಿ.
ತುಲಾ ರಾಶಿಯವರ ಭವಿಷ್ಯ:
ಕರ್ಮ ಸ್ಥಾನಾಧಿಪತಿ ಭಾಗ್ಯದಲ್ಲಿ ಕುಳಿತಿದ್ದಾನೆ. ಇದರಿಂದ ದಿನ ಉತ್ತಮವಾಗಿದೆ. ಆದರೆ, ಹಿಂದೆ ನೀವು ಮಾಡಿರುವ ತಪ್ಪು ಅಥವಾ ಹಣಕಾಸಿನ ವಿಚಾರದಲ್ಲಿ ಯಾರೋ ಮಾಡಿರುವ ತಪ್ಪುಗಳಿಗೆ ಇಂದು ನೀವು ತಲೆಕೊಡಬೇಕಾಗಬಹುದು.
ಇಂದು ಕಚೇರಿಯಲ್ಲಿ ಮೊದಲು ಲೆಕ್ಕಪತ್ರಗಳನ್ನು ಪರಿಶೀಲಿಸಿ.
ವೃಶ್ಚಿಕ ರಾಶಿಯವರ ಭವಿಷ್ಯ:
ಭಾಗ್ಯಾಧಿಪತಿ ಅಷ್ಟಮದಲ್ಲಿ ಕುಳಿತಿರುವುದರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕಾದ ದಿನ. ಇಲ್ಲವೇ, ಅವಕಾಶಗಳು ಕೈತಪ್ಪಿ ಹೋಗುವ ಸಂಭವವಿರುತ್ತದೆ. ಇದರ ಹಿಂದೆ ಬೇರೆಯವರ ಪಿತೂರಿ ಇರುತ್ತದೆ. ಸೂಕ್ಷ್ಮತೆಯಿಂದ ಇದನ್ನು ಗ್ರಹಿಸಿದರೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
ಧನು ರಾಶಿಯವರ ಭವಿಷ್ಯ:
ಆರನೇ ಮನೆಯ ಅಧಿಪತಿ ಇಂದು ಸಪ್ತಮದಲ್ಲಿರುವ ವಿಶೇಷ ಸನ್ನಿವೇಶ ಕಾಣುತ್ತಿದ್ದು, ನಿಮ್ಮವರಿಂದಲೇ ನಷ್ಟ, ತೊಂದರೆ ಸಾಧ್ಯತೆ ಇದೆ. ಹೊಸದಾಗಿ ಆರಂಭಿಸಿರುವ ಜಂಟಿ ವ್ಯವಹಾರದಲ್ಲಿ ಭಾರೀ ನಷ್ಟ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಿ.
ಮಕರ ರಾಶಿಯವರ ಭವಿಷ್ಯ:
ಸಪ್ತಮಾಧಿಪತಿ ಷಷ್ಟದಲ್ಲಿದ್ದಾನೆ. ಅದೇ ರೀತಿ ದ್ವಿತೀಯದಲ್ಲಿ ರಾಹು ಅಷ್ಟಮದಲ್ಲಿ ಕುಜ-ಕೇತು ಇರುವುರಿಂದ ಎಚ್ಚರಿಕೆಯಿಂದ ಇರಬೇಕಾದ ದಿನ. ಎಷ್ಟೇ ಹಣ ಬಂದರೂ ಕೈಯಲ್ಲಿ ಹಣ ನಿಲ್ಲುವುದಿಲ್ಲ.
ಕುಂಭ ರಾಶಿಯವರ ಭವಿಷ್ಯ:
ಷಷ್ಟಾಧಿಪತಿ ಇಂದು ಪಂಚಮದಲ್ಲಿರುವುದರಿಂದ ವಿದ್ಯಾರ್ಥಿಗಳು ಇಂದು ಎಚ್ಚರಿಕೆಯಿಂದ ಇರಬೇಕು. ಇಂದು ನಿಮ್ಮ ಹೆಸರು, ಜನಪ್ರಿಯತೆಗೆ ವಿರುದ್ಧವಾಗಿ ನಡೆದುಕೊಳ್ಳುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಜಾಗರೂಕರಾಗಿರಿ.
ಮೀನ ರಾಶಿಯವರ ಭವಿಷ್ಯ :
ಪಂಚಮಾಧಿಪತಿ ಇಂದು ಚತುರ್ಥದಲ್ಲಿರುವುದರಿಂದ ದೊಡ್ಡ ಮಟ್ಟದ ಪ್ರಯತ್ನಗಳಿಂದ ದೂರ ಉಳಿಯುವುದು ಒಳ್ಳೆಯದು. ಇಲ್ಲವೇ ನಕಾರಾತ್ಮಕ ಫಲಿತಾಂಶಗಳು ಹೆಚ್ಚಾಗಬಹುದು.
View More Videos