ಪ್ರತಿಯೊಬ್ಬರೂ ಫಿಟ್ ಮತ್ತು ಆರೋಗ್ಯವಾಗಿರಲು ಬಯಸುತ್ತಾರೆ. ಆದರೆ ಇಂದಿನ ಒತ್ತಡದ ಜೀವನ ಮತ್ತು ಹದಗೆಡುತ್ತಿರುವ ಆಹಾರ ಪದ್ಧತಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದರ ದೊಡ್ಡ ಪರಿಣಾಮ ಜನರಲ್ಲಿ ತೂಕ ಹೆಚ್ಚಾಗುವ ರೂಪದಲ್ಲಿ ಕಂಡುಬರುತ್ತದೆ. ಬೊಜ್ಜು ದೇಹವನ್ನು ಭಾರವಾಗಿಸುತ್ತದೆ. ಜೊತೆಗೆ ಅನೇಕ ರೋಗಗಳನ್ನು ಆಹ್ವಾನಿಸುತ್ತದೆ. ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು ಜನರು ಹರ ಸಾಹಸ ಪಡುತ್ತಾರೆ. ಉಪವಾಸ ಮಾಡುವುದು, ಕೆಲವೊಂದು ಆಹಾರ ಸೇವನೆಯನ್ನು ನಿಲ್ಲಿಸುವುದು ಹೀಗೆ ಕಷ್ಟಕರವಾದ ಆಹಾರ ಪದ್ದತಿಗಳನ್ನು ಅನುಸರಿಸುತ್ತಾರೆ. ಆದರೆ ತೂಕ ಕಳೆದುಕೊಳ್ಳಲು ಬಯಸುವವರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಡಯೆಟಿಂಗ್ ಬದಲಿಗೆ ಸ್ಮಾರ್ಟ್ ಈಟಿಂಗ್ ಅನುಸರಿಸಿದರೆ ಬಹಳ ಕಡಿಮೆ ಸಮಯದಲ್ಲಿ ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು.
ತೂಕ ಕಳೆದುಕೊಳ್ಳಲು ಸಹಾಯ ಮಾಡುವ ಸೂಪರ್ಫುಡ್ಗಳು :
ಪೌಷ್ಟಿಕಾಂಶ-ಭರಿತ ವಸ್ತುಗಳು ಹಸಿವನ್ನು ನಿಯಂತ್ರಿಸುವುದಲ್ಲದೆ ದೇಹದ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತವೆ. ಹಾಗಿದ್ದರೆ ಹೆಚ್ಚುತ್ತಿರುವ ತೂಕವನ್ನು ವೇಗವಾಗಿ ಕಡಿಮೆ ಮಾಡುವ ಸೂಪರ್ಫುಡ್ ಯಾವುದು ?
ಇದನ್ನೂ ಓದಿ : ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ನಿಮ್ಮ ದಿನಚರಿ ಹೀಗಿರಲಿ..!
ತೂಕ ಇಳಿಸಿಕೊಳ್ಳಲು ಯೋಚಿಸಿದಾಗ, ಯಾರೇ ಆಗಲಿ ಮೊದಲು ಮಾಡುವ ಕೆಲಸ ಆಹಾರ ಲಿಸ್ಟ್ ನಿಂದ ಆಲೂಗಡ್ಡೆಯಂತಹ ವಸ್ತುಗಳನ್ನು ಹೊರಗಿಡುವುದು. ಆಲೂಗಡ್ಡೆಯನ್ನು ಬೊಜ್ಜು ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಆದರೆ ಆಲೂಗಡ್ಡೆಯನ್ನು ಸರಿಯಾಗಿ ಬೇಯಿಸಿ ತಿಂದರೆ, ಅದೇ ಆಲೂಗಡ್ಡೆ ತೂಕ ಇಳಿಸಿಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ.
ಆಲೂಗಡ್ಡೆಯನ್ನು ಬೇಯಿಸಿ ತಿಂದರೆ ಮತ್ತು ಅದಕ್ಕೆ ಹುರಿದ ಮಸಾಲ ಸೇರಿಸದಿದ್ದರೆ, ಅದು ಹಸಿವನ್ನು ನಿಯಂತ್ರಿಸುವುದಲ್ಲದೆ ತೂಕವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ತರಕಾರಿ ಎನ್ನುತ್ತಾರೆ ಆಹಾರ ತಜ್ಞರು. ಆಲೂಗಡ್ಡೆಯಲ್ಲಿರುವ ನಿರೋಧಕ ಪಿಷ್ಟವು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ದೀರ್ಘಕಾಲದವರೆಗೆ ಹಸಿವಾಗದಂತೆ ತಡೆಯುತ್ತದೆ.
ಇದನ್ನೂ ಓದಿ : ಯೂರಿಕ್ ಆಮ್ಲ ಹೆಚ್ಚಾದಾಗ ದೇಹದ ಈ ಭಾಗಕ್ಕೆ ಬಹಳಷ್ಟು ತೊಂದರೆ: ಅಪ್ಪಿತಪ್ಪಿಯೂ ನಿರ್ಲಕ್ಷ್ಯ ಮಾಡಬೇಡಿ...
ಹಸಿವನ್ನು ನಿಯಂತ್ರಿಸುತ್ತದೆ :
ಬೇಯಿಸಿದ ಆಲೂಗಡ್ಡೆಯಲ್ಲಿ ನಿರೋಧಕ ಪಿಷ್ಟ ಕಂಡುಬರುತ್ತದೆ. ಇದು ನಿಧಾನವಾಗಿ ಜೀರ್ಣವಾಗುತ್ತದೆ. ಹಾಗಾಗಿ ಆಲುಗಡ್ಡೆ ತಿದರೆ ಬಹಳ ಸಮಯದವರೆಗೆ ಹಸಿವಾಗುವುದಿಲ್ಲ. ಮಾತ್ರವಲ್ಲ ಇದು ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತದೆ.
ಜೀರ್ಣಕ್ರಿಯೆಯೂ ಚೆನ್ನಾಗಿರುತ್ತದೆ :
ಇದರೊಂದಿಗೆ, ಬೇಯಿಸಿದ ಆಲೂಗಡ್ಡೆಯಲ್ಲಿರುವ ಕ್ಯಾಲೋರಿ ಕೂಡಾ ಕಡಿಮೆ. ಇದು ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಹಾಗಾಗಿ ಆಲುಗಡ್ಡೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಲೂಗಡ್ಡೆಯಲ್ಲಿರುವ ಪಿಷ್ಟವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.
ಇದನ್ನೂ ಓದಿ : ಟೆಸ್ಟ್ ಮಾಡಿಸುವ ಅಗತ್ಯವೇ ಇಲ್ಲ, ಬೆಳಿಗ್ಗೆ ಎದ್ದ ಕೂಡಲೇ ಹೀಗಾಗುತ್ತಿದ್ದರೆ ಬ್ಲಡ್ ಶುಗರ್ ಹೆಚ್ಚಾಗಿದೆ ಎಂದರ್ಥ !
ಈ ವಿಷಯಗಳನ್ನು ಸಹ ನೆನಪಿನಲ್ಲಿಡಿ :
ಆಲೂಗಡ್ಡೆಯನ್ನು ಯಾವತ್ತೂ ಹುರಿದು, ಕರಿದು ತಿನ್ನಬಾರದು. ಇದು ಅವುಗಳ ಪೌಷ್ಟಿಕಾಂಶದ ಮೌಲ್ಯವನ್ನು ಬಹುತೇಕ ತೆಗೆದುಹಾಕುತ್ತದೆ ಮತ್ತು ತೂಕವು ವೇಗವಾಗಿ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ. ಆಹಾರ ತಜ್ಞರ ಪ್ರಕಾರ, ತೂಕ ಇಳಿಸಿಕೊಳ್ಳಲು ನೈಸರ್ಗಿಕ ಮತ್ತು ಅಗ್ಗದ ಮಾರ್ಗವನ್ನು ಹುಡುಕುತ್ತಿದ್ದರೆ, ಬೇಯಿಸಿದ ಆಲೂಗಡ್ಡೆ ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ
(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.