Home> Lifestyle
Advertisement

ರಾತ್ರಿ ಊಟಕ್ಕೆ ಇದೊಂದು ತರಕಾರಿ ಸೇವಿಸಿಯೇ ಬರೋಬ್ಬರಿ 40 ಕೆಜಿ ತೂಕ ಇಳಿಸಿಕೊಂಡ ಯುವಕ !

ಊಟದ ಸಮಯದಲ್ಲಿ ನಾವು ತೆಗೆದುಕೊಳ್ಳುವ ಕೆಲವೊಂದು ಎಚ್ಚರಿಕೆ ದೇಹ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಇಲ್ಲಿ ಯುವಕನೊಬ್ಬ ಭೋಜನದ ವೇಳೆ ಈ ತರಕಾರಿ ಸೇವಿಸಿ ಬರೋಬ್ಬರಿ  40 ಕೆಜಿ ತೂಕ ಇಳಿಸಿಕೊಂಡಿದ್ದಾರೆ. 
 

ರಾತ್ರಿ ಊಟಕ್ಕೆ ಇದೊಂದು ತರಕಾರಿ ಸೇವಿಸಿಯೇ ಬರೋಬ್ಬರಿ 40 ಕೆಜಿ ತೂಕ ಇಳಿಸಿಕೊಂಡ ಯುವಕ !

Weight Lose Tips : ಗಂಡಾಗಲಿ ಹೆಣ್ಣಾಗಲಿ ನೋಡುವುದಕ್ಕೆ ಚಂದವಾಗಿ ಕಾಣಬೇಕು. ಉತ್ತಮ ಮೈಕಟ್ಟು ಹೊಂದಿರಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ನಾವು ಅನುಸರಿಸುವ ಜಡ ಜೀವನ ಶೈಲಿಯಿಂದ ಎಲ್ಲವೂ ಹಾಳಾಗುತ್ತದೆ. ಆದರೆ ಊಟದ ಸಮಯದಲ್ಲಿ ತೆಗೆದುಕೊಳ್ಳುವ ಕೆಲವೊಂದು ಎಚ್ಚರಿಕೆ ಮತ್ತೆ ಅಚ್ಚುಕಟ್ಟಾದ ಮೈ ಕಟ್ಟು ಹೊಂದಲು ಸಹಾಯ ಮಾಡುತ್ತದೆ. ಇದಕ್ಕೆ ದುಬೈನ ಜುಬೇರ್ ಚೌಧರಿಯೇ ಸಾಕ್ಷಿ. 

ದುಬೈನ ಜುಬೇರ್ ಚೌಧರಿ ಕೇವಲ 5 ತಿಂಗಳಲ್ಲಿ 40 ಕೆಜಿ ತೂಕ ಇಳಿಸಿಕೊಂಡಿದ್ದಾರೆ. 135 ಕೆಜಿ ಇದ್ದ ಚೌಧರಿ 95 ಕೆಜಿಗೆ ಇಳಿದಿದ್ದಾರೆ. ಇದಕ್ಕಾಗಿ ಅವರು ಹೆಚ್ಚು ಕಷ್ತಪಟ್ಟಿಲ್ಲ, ಊಟದ ಸಮಯದಲ್ಲಿ ಈ ಇದೊಂದು ತರಕಾರಿ ಸೇವಿಸಿದ್ದಾರೆ ಅಷ್ಟೇ. 

ಇದನ್ನೂ ಓದಿ : ಮಳೆಗಾಲದಲ್ಲಿ ಮನೆಯ ಮುಖ್ಯ ಬಾಗಿಲಿಗೆ ಈ ಎಲೆಯನ್ನು ನೇತುಹಾಕಿದರೆ... ಒಂದೇ ಒಂದು ಸೊಳ್ಳೆ ಕೂಡ ಹತ್ತಿರ ಸುಳಿಯಲ್ಲ

ಜುಬೇರ್ ಚೌಧರಿ ತಾನು ತೂಕ ಇಳಿಸಿಕೊಂಡಿರುವ ವಿಚಾರವಾಗಿ ನೀಡಿರುವ ಸಂದರ್ಶನದಲ್ಲಿ ವೇಟ್ ಲಾಸ್ ಮಾಡುವಾಗ ತಾನು ಸೇವಿಸಿದ ಮತ್ತು ಸೇವಿಸದ ಆಹಾರಗಳ ಬಗ್ಗೆ ಮಾತನಾಡಿದ್ದಾರೆ. ತೂಕ ಇಳಿಸಿಕೊಳ್ಳಲೇ ಬೇಕು ಎಂದು ನಿರ್ಧರಿಸಿದ ದಿನದಿಂದ  ಜುಬೇರ್ ಫಾಸ್ಟ್ ಫುಡ್ ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಮನೆ ಅಡುಗೆಗೆ ಪ್ರಾಮುಖ್ಯತೆ ನೀಡಿದ್ದಾರೆ. ಅಲ್ಲದೆ ಭೋಜನದ ವೇಳೆ ಸಲಾಡ್, ತರಕಾರಿ ಮತ್ತು ಕೋಳಿಮಾಂಸ ಸೇವನೆಗೆ ಒತ್ತು ನೀಡಿದ್ದಾರೆ. ಇಷ್ಟು ಮಾಡುತ್ತಲೇ ಅವರು ದಿನೇ ದಿನೇ ತೂಕ ಇಳಿಯುವುದನ್ನು ಗಮನಿಸಿದ್ದಾರೆ. 

ಹೀಗೆ ಮಾಡುತ್ತಾ ಮಾಡುತ್ತಾ 12 ವಾರಗಳಲ್ಲಿ ಬರೋಬ್ಬರಿ 34.6 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅವರು ಸತತ ಒಂದು ದಿನವೂ ನಿಲ್ಲದೆ ಈ ಪ್ರಕ್ರಿಯೆಯನ್ನು ಮಾಡುತ್ತಿದ್ದಾರೆ. ಒಟ್ಟು 5 ತಿಂಗಳಲ್ಲಿ ಬರೋಬ್ಬರಿ 40 ಕೆಜಿ ತೂಕ ಇಳಿಸಿಕೊಂಡು ತಮ್ಮ ದೇಹ ತೂಕವನ್ನು 95 ಕೆಜಿಗೆ ತಂದಿದ್ದಾರೆ. ಮುಂದಿನ ತಿಂಗಳಲ್ಲಿ ಈ ತೂಕವನ್ನು 80 ಕೆಜಿಗೆ ಇಳಿಸುವ  ಪ್ರಯತ್ನದಲ್ಲಿದ್ದಾರೆ ಜುಬೇರ್ ಚೌಧರಿ.   

ಇದನ್ನೂ ಓದಿ : ಈ ಎಲೆಯ ನೀರು ಕುಡಿದರೆ ಬುಡದಿಂದಲೇ ನೈಸರ್ಗಿಕವಾಗಿ ಕಪ್ಪಾಗುವುದು ಬಿಳಿಕೂದಲು... ರೇಷ್ಮೆಯಂಥಾ ದಷ್ಟಪುಷ್ಟ ಸೊಂಪಾದ ಕೂದಲು ಸೊಂಟ ದಾಟಿ ಬೆಳೆಯುತ್ತೆ

ನಾವು ತಿನ್ನುವ ಆಹಾರವು ನಮ್ಮ ತೂಕವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಅದೆಷ್ಟೇ ವಾಕ್ ಮಾಡಬಹುದು, ಜಾಗ್ ಮಾಡಬಹುದು,   ವ್ಯಾಯಾಮ ಮಾಡಬಹುದು. ಆದರೆ ಆಹಾರವನ್ನು ಸರಿಯಾದ ರೀತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಸೇವಿಸಿದೇ ಹೋದರೆ ಎಲ್ಲವೂ ವ್ಯರ್ಥ ಎನ್ನುತ್ತಾರೆ ಜುಬೇರ್ ಚೌಧರಿ . 

(ಸೂಚನೆ : ಇವೆಲ್ಲವೂ ಜುಬೇರ್ ಚೌಧರಿಯವರ ವೈಯಕ್ತಿಕ ಅನುಭವಗಳು. ಇದನ್ನು ಅನುಸರಿಸುವ ಮೊದಲು ನೀವು ವೈದ್ಯಕೀಯ ಸಲಹೆಯನ್ನು ಪಡೆಯಬೇಕು.ಇದನ್ನು ಜೀ ಕನ್ನಡ ನ್ಯೂಸ್ ದೃಢಪಡಿಸಿಲ್ಲ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Read More